ಕರಾವಳಿ

ಮಂಗಳೂರು: ವಾಷಿಂಗ್‌ ಮೆಷಿನ್‌ ರಿಪೇರಿಗೆ ಬಂದವರಿಗೆ ಹಲ್ಲೆ

ಮಂಗಳೂರು: ವಾಷಿಂಗ್‌ ಮೆಷಿನ್‌ ದುರಸ್ತಿಗೆ ಬಂದ ಟೆಕ್ನೀಶಿಯನ್‌ಗೆ ಹಲ್ಲೆ ನಡೆಸಿದ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇಶವ ಅವರು ಎಲ್‌.ಜಿ. ಕಂಪೆನಿಯ ಸರ್ವಿಸ್‌ ಸೆಂಟರ್‌ನಲ್ಲಿ ಟೆಕ್ನೀಶಿಯನ್‌ ಆಗಿದ್ದು, ಕೆತ್ತಿಕಲ್ಲಿನ ಸುಚಿತ್ರಾ ವಾಷಿಂಗ್‌ ಮೆಷಿನ್‌ ಕೆಟ್ಟು ಹೋಗಿರುವ ಬಗ್ಗೆ ಕಂಪೆನಿಗೆ ದೂರು ನೀಡಿದ್ದರು. ಕೇಶವ ಅವರು ಹೋಗಿ ನೋಡಿದಾಗ ವಾಷಿಂಗ್‌ ಮೆಷಿನ್‌ ಕೆಟ್ಟು ಹೋಗಿತ್ತು. ವಯರ್‌ ಮತ್ತು ಪೈಪ್‌ ಅನ್ನು ಇಲಿ ತುಂಡು ಮಾಡಿತ್ತು. ಕಂಪೆನಿಯವರೇ ರಿಪೇರಿ ಮಾಡುವಂತೆ ಮನೆಯವರು ತಿಳಿಸಿದ್ದರು. ಅದರಂತೆ ಕೇಶವ ಅವರು ರವಿವಾರ ಮಧ್ಯಾಹ್ನ ಸಾಮಗ್ರಿಗಳನ್ನು ತೆಗೆದುಕೊಂಡು ಸುಚಿತ್ರಾ ಅವರ ಮನೆಗೆ ಹೋದಾಗ ಒಂದು ಪಾರ್ಟ್‌ ವಾಷಿಂಗ್‌ ಮೆಷಿನ್‌ ಗೆ ಸರಿ ಹೊಂದದೆ ಇದ್ದುದರಿಂದ ಮರುದಿನ ಹಾಕುವುದಾಗಿ ತಿಳಿಸಿದ್ದರು. ಆಗ ಸುಚಿತ್ರಾ ಮನೆಯಲ್ಲಿದ್ದ ಆರೋಪಿತನು ಕೇಶವ ಅವರಿಗೆ ಅವಾಚ್ಯವಾಗಿ ಬೈದು ಹಲ್ಲೆ ನಡೆಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!